ಒಂದು ಎಚ್ಚರಿಕೆ

ಬಹೀರಮುಖ ಜಗತ್ತನ್ನು ಮರೆ
ಅಂತರ ಮುಖನಾಗಿ ನೀನು ಚಲಿಸು
ಹೊರಗಿನ ಸೌಂದರ್‍ಯ ಕ್ಷಣಿಕ
ಒಳಗಿನ ಸ್ವರೂಪವೆ ಧನ್ಯ

ಮನಸ್ಸನ್ನು ಬಗ್ಗಿಸಿ ಹಿಡಿಯಬೇಕು
ಹೆಜ್ಜೆ ಹೆಜ್ಜೆ ಅದಕ್ಕೆ ತಿದ್ದಬೇಕು
ಅದು ಇಚ್ಛಿಸಿದಂತೆ ನಿ ಬಯಸದಿರು
ನಿನ್ನ ಇಚ್ಛೆ ಕಾಣಲು ಮನ ತವಕಿಸಬೇಕು

ಹೊರಗಿನ ಆಡಂಬರಗಳಿಗೆ ನೋಡದಿರು
ಪರರನ್ನು ಮೆಚ್ಚಿಸಲು ವರ್‍ತಿಸದಿರು
ನಿನ್ನ ಕಷ್ಟ ಸುಖಕ್ಕೆಲ್ಲ ಯಾರು ಹೊಣೆ?
ಅವರನ್ನು ರೂಪಿಸಲು ನೀ ನಾರು?

ಬದುಕಿನ ಈ ಕ್ಷಣ ಕ್ಷಣಗಳು ನಾಶದತ್ತ
ಶರೀರ ಸುಖ ಬಯಸಿ ವಿನಾಶಿಯಾಗಲಿದೆ
ನೀನು ಮಾತ್ರ ನಿತ್ಯ ಅವಿನಾಶಿ
ನಿನ್ನ ಧರ್‍ಮವೆ ನಿನ್ನ ಕಾಯಲಿದೆ

ನೀನು ಈಗಲೇ ಅಚಲನಾಗಿರು
ನಾಳೆಯೆಂಬುದೆಲ್ಲ ಬರೀ ಗೊಳ್ಳು
ಈ ಕ್ಷಣಗಳು ಈಗ ಅತ್ಯಮೂಲ್ಯ
ಮಾಣಿಕ್ಯ ವಿಠಲನಾಗಿ ಪಾವನಗೊಳ್ಳು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೩೯
Next post ಜನ್ಮಭೂಮಿ

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys